ಪ್ರೇಮ ಕಾವ್ಯಕ್ಕೆ ನಿನ್ನುಸಿರೆ ಶೀರ್ಷಿಕೆ
ಕೊನೆಯಾಗಿಸು ಬೇಗ ಈ ನನ್ನ ಕಾತರಿಕೆ
ಪ್ರಯಾಸವೇ ಬೇಡ ಪ್ರಾಸಕ್ಕೆ
ಪ್ರತಿ ಮಾತಲ್ಲೂ ಇರಲು ಮುತ್ತಿನ ಹೊದಿಕೆ
ಬಳಿ ನೀನೆ ಇರಲು ಭಾವಕ್ಕೆಲ್ಲಿಯ ಕೊರತೆ
ಮುಗುಳ್ನಗೆಯೇ ಹೂರಣವು ಪಲ್ಲವಿ ಚರಣಕ್ಕೆ
ಮತ್ತೊಮ್ಮೆ ಜೊತೆಯಾಗಿ ಬರೆಯುವ ಬಯಕೆ
ಹಾಗಾಗಿ ಕಾದಿರುವೆ ನಿನ್ನಯ ಆಗಮನಕ್ಕೆ.
Leave a Reply