ಬಿತ್ತ ಬೀಜ ದುರ್ಬೀಜ ಎಂದು ಅರಿಯಲು ಹಲವು ವರ್ಷಗಳೇ ಸಂದವು. ಬೆಳೆದು ನಿಂತ ಮರವನ್ನು ಕಿತ್ತೊಗೆಯವ ಧೈರ್ಯ, ಶಕ್ತಿ ನನ್ನಲ್ಲಿ ಇಲ್ಲ. ಏಕೆಂದರೆ, ಆ ಮರ ಈಗಾಗಲೇ ಬೆಳೆದು ಹೆಮ್ಮರವಾಗಿ ಬಹು ದೂರ ಬೇರ ಹಬ್ಬಿಸಿಕೊಂಡಿದೆ ಮತ್ತು ಇಂದು ಅದೇನೇ ಆಗಿದ್ದರೂ ನನ್ನದೇ ದೇಹದ ಭಾಗವೇ ಅಲ್ಲವೇ…
ಭಾವನೆಗಳ ಬೇಲಿಯಲ್ಲಿ ಬಂಧಿಯಾಗಿರುವೆ ನಾನು. ಮನಸ್ಸು ಕರುಳ ಸಂಬಂಧವನ್ನು ಕೂಗಿ ಹೇಳುತ್ತಿದೆ. ಆದರೆ ಬುದ್ಧಿ, ಭೂಮಿಯ ಭಾರವನ್ನು ಹಗುರಾಗಿಸಿ, ಋಣವ ತೀರಿಸು ಎನ್ನುತ್ತಿದೆ. ಬುದ್ಧಿ ಮನಸ್ಸಿನ ನಡುವಿನ ಹೋರಾಟದಲ್ಲಿ ಗೆಲುವು ಯಾರದ್ದಾದರೂ ಸಂಭ್ರಮಿಸುವ ಸ್ಥಿತಿಯಲ್ಲಿ ನಾನಿಲ್ಲಿ ಇಂದು.
ಪ್ರೀತಿ ವಾತ್ಸಲ್ಯದ ಅಮೃತಧಾರೆಯನ್ನೆರೆದೆ ನಿನಗೆ, ಅರಿಯಲಿಲ್ಲ ಅದೆಂದು ವಿಷವಾಗಿ ತಿರುಗಿತೆಂದು. ಅದೇನೇ ಇದ್ದರೂ ಈ ದುರ್ಬೀಜ ಸುತ್ತೆಲ್ಲ ಪಸರಿಸುವ ಮೊದಲು ನಾನೊಂದು ಧೃಡ ನಿರ್ಧಾರ ತೆಗೆದುಕೊಂಡು ಈ ಮಣ್ಣಿನ ಋಣ ತೀರಿಸಬೇಕು.
Leave a Reply